Malenadu Mitra
ಬೇಸಾಯರಾಜ್ಯಶಿಕಾರಿಪುರ

ಬೆಲೆಕುಸಿತ:ಶುಂಠಿ ಬೆಳೆಗಾರ ಆತ್ಮಹತ್ಯೆ

ಶುಂಠಿ ಬೆಲೆ ಕುಸಿತದಿಂದ ಕಂಗಾಲಾದ ರೈತನೊಬ್ಬ ಆತ್ಮಹತ್ಯೆಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಮಟ್ಟಿಕೋಟೆಯಲ್ಲಿ ವರದಿಯಾಗಿದೆ.
ಅಶೋಕಪ್ಪ(೪೧) ಆತ್ಮಹತ್ಯೆ ಮಾಡಿಕೊಂಡ ರೈತ. ಅಪಾರ ಸಾಲ ಮಾಡಿದ್ದ ರೈತ ಶುಂಠಿ ಬೆಳೆಯಲ್ಲಿ ಲಾಭ ಬರಬಹುದೆಂದು ನಿರೀಕ್ಷೆ ಮಾಡಿದ್ದ ಆದರೆ ಬೆಲೆ ಕುಸಿತ ಹಾಗೂ ಬೆಳೆನಷ್ಟದಿಂದ ಆತ ನೊಂದಿದ್ದ ಎನ್ನಲಾಗಿದೆ.
ಆತ ಬೆಳೆದಿದ್ದ ಬಾಳೆ ಬೆಳೆಯಿಂದಲೂ ನಷ್ಟವುಂಟಾಗಿತ್ತು ಎನ್ನಲಾಗಿದೆ. ಇದ್ದ ನಾಲ್ಕು ಎಕರೆ ಜಮೀನನ್ನೂ ಮಾರಾಟ ಮಾಡಿದ್ದ ಅಶೋಕಪ್ಪ, ಶಿಕಾರಿಪುರದ ಅರ್ಜುನ್ ಬ್ಯಾಂಕ್‌ನಲ್ಲಿ ೮ ಲಕ್ಷ ,ಶಿವ ಸಹಕಾರಿ ಬ್ಯಾಂಕಿನಲ್ಲಿ ೨ ಲಕ್ಷ ಸೇರಿದಂತೆ ೧೨ ಲಕ್ಷ ಸಾಲ ಮಾಡಿಕೊಂಡಿದ್ದ ಎಂದು ಆತನ ಸಂಬಂಧಿಗಳೂ ತಿಳಿಸಿದ್ದಾರೆ. ಬೆಳೆ ನಷ್ಟದಿಂದ ಬೇಸತ್ತ ಅಶೋಕಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಶಿಕಾರಿಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Ad Widget

Related posts

ವಿದ್ಯಾರ್ಥಿಗಳು ಅಂಕಗಳಿಕೆಯೊಂದಿಗೆ ಜೀವನ ಮೌಲ್ಯ ಅಳವಡಿಸಿಕೊಳ್ಳಬೇಕು, ಸರ್ಕಾರಿ ನೌಕರರ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಾ.ಸರ್ಜಿ ಅಭಿಮತ

Malenadu Mirror Desk

ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಖೇಲೊ ಇಂಡಿಯಾದ ಕ್ರೀಡಾ ತರಬೇತಿ ಕೇಂದ್ರ ಇಲ್ಲ ?

Malenadu Mirror Desk

ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಬೇಡ: ರೈತರ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.