Malenadu Mitra
ರಾಜ್ಯಶಿವಮೊಗ್ಗ

ಆನೆಗಳಿಗೆ ಅಕ್ಕಿ, ಬೆಲ್ಲ, ತರಕಾರಿ

ಕಳೆದ ಜೂನ್​ ನಾಲ್ಕರಂದು ಸಕ್ರೆಬೈಲು ಆನೆ ಬಿಡಾರದ ದಿನಗೂಲಿ ಸಿಬ್ಬಂದಿಗೆ ಪುಡ್​ ಕಿಟ್​ ಒದಗಿಸಿದ್ದ ವೈಲ್ಡ್​ ಟಸ್ಕರ್​ ಸಂಸ್ಥೆಯ ಗೌರವ ಟ್ರಸ್ಟಿ, ಜೆಡಿಎಸ್​ನ ರಾಜ್ಯಪ್ರಧಾನ ಕಾರ್ಯದರ್ಶಿ ಬಾನುವಾರ ಸಕ್ರೈಬೈಲ್​ನ ಆನೆ ಬಿಡಾರದ ಆನೆಗಳಿಗೆ ಅಕ್ಕಿ, ಬೆಲ್ಲ, ತರಕಾರಿ, ಕಾಯಿಯನ್ನು ವಿತರಿಸಿದರು. ಎರಡು ದಿನಗಳ ಹಿಂದಷ್ಟೆ ಸಕ್ರೆಬೈಲ್​ ಬಿಡಾರಕ್ಕೆ ಭೇಟಿ ಕೊಟ್ಟು ಇಲ್ಲಿನ ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿದ್ದರು. ಅಲ್ಲದೆ ಅವರ ಸಮಸ್ಯೆಗಳನ್ನು ಆಲಿಸಿದ್ದ ಎಂ ಶ್ರೀಕಾಂತ್​ರವರು ಇವತ್ತು, ಆನೆಗಳಿಗೆ ಅಕ್ಕಿ, ಬೆಲ್ಲ, ತರಕಾರಿ, ಕಾಯಿಯನ್ನು ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಶ್ರೀಕಾಂತ್​ರವರು ಲಾಕ್​ಡೌನ್​ನಿಂದಾಗಿ ವನ್ಯಜೀವಿಗಳು ಸಹ ಸಂಕಷ್ಟದಲ್ಲಿವೆ, ಆಹಾರಕ್ಕಾಗಿ ಈ ಭಾಗದ ರಸ್ತೆಬದಿಗಳಲ್ಲಿ ಬರುವ ವಾಹನಗಳನ್ನು ಎದುರು ನೋಡುತ್ತಿದ್ದ ಮಂಗಗಳು ಇದೀಗ ಊರುಗಳಿಗೆ ನುಗ್ಗುತ್ತಿವೆ. ಸಂಕಷ್ಟದ ಈ ಸಂದರ್ಭದಲ್ಲಿ ವನ್ಯಜೀವಿಗಳ ಹಸಿವು ನೀಗಿಸಬೇಕಾದ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಈ ವೇಳೆ, ವಲಯ ಅರಣ್ಯಾಧಿಕಾರಿ ಶಿವರಾಜ್ ಮಠದ್​, ವನ್ಯಜೀವಿ ವೈದ್ಯ ಡಾ.ವಿನಯ್​, ಫಾರೆಸ್ಟ್​ ಗಾರ್ಡ್​ ಗೀತಾ, ಜಮೇದಾರ್​ ಜಲೀಲ್​ ಹಾಗೂ ವೈಲ್ಡ್​ ಟಸ್ಕರ್​ ಸಂಸ್ಥೆಯ ನಿರ್ದೇಶಕ ಜೇಸುದಾಸ್​ ಪಿ ಉಪಸ್ಥಿತರಿದ್ದರು.

Ad Widget

Related posts

ಗೆಳೆಯನೆಂಬ ಪಥಿಕನಜೊತೆ ಪಥವನರಸಿ…

Malenadu Mirror Desk

ಆಕ್ಸಿಜನ್, ವೆಂಟಿಲೇಟರ್ ಕೊರತೆ ಇಲ್ಲ

Malenadu Mirror Desk

ಶಿಕಾರಿಪುರದಲ್ಲಿ ಸ್ವಾಭಿಮಾನದ ಚುನಾವಣೆ, ಜನರ ನಡುವೆ ಇದ್ದು ಅವರ ಸೇವೆ ಮಾಡುವೆ, ಪತ್ರಿಕಾ ಸಂವಾದದಲ್ಲಿ ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.