Malenadu Mitra
ರಾಜ್ಯಶಿವಮೊಗ್ಗ

ಹೆದ್ದಾರಿ ಯೋಜನೆಗಳಿಗೆ ಗುದ್ದಲಿಪೂಜೆ

ಶಿವಮೊಗ್ಗ ಜನರ ಬಹುನಿರೀಕ್ಷಿತ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಇದೇ ಡಿಸಿಂಬರ್ ೧೯ ರಂದು ಕೇಂದ್ರ ಸಚಿವ ನಿತಿನ್‌ಗಡ್ಕರಿ ಚಾಲನೆ ನೀಡಲಿದ್ದಾರೆ.
ಸಂಸದ ಬಿ.ವೈ.ರಾಘವೇಂದ್ರ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ೫೧೭ ಕೋಟಿ ರೂ.ಮೊತ್ತದ ಹೆದ್ದಾರಿ ಯೋಜನೆ, ೪೦ ಕೋಟಿ ರೂ. ಮೊತ್ತದ ರೈಲ್ವೆ ಮೇಲ್ಸೇತುವೆ, ೯೬ ಕೋಟಿ ವೆಚ್ಚದ ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ ದ್ವಿಪಥ ರಸ್ತೆ ಕಾಮಗಾರಿಗೆ ಸಚಿವರ್ ಆನ್‌ಲೈನ್ ಕಾರ್ಯಕ್ರಮದ ಮೂಲಕ ಚಾಲನೆ ನೀಡುವರು ಎಂದು ಅವರು ಹೇಳಿದರು.
ಇದಲ್ಲದೆ ೯ ಕೋಟಿ ವೆಚ್ಚದಲ್ಲಿ ಆಗುಂಬೆ ಸಮೀಪದಲ್ಲಿ ಮೂರು ಕಿರುಸೇತುವೆ.೧೬ ಕೋಟಿ ವೆಚ್ಚದಲ್ಲಿ ಹೊಸನಗರ-ನಿಟ್ಟೂರು ಹೆದ್ದಾಯಲ್ಲಿನ ಶಿಥಿಲಗೊಂಡ ಸೇತುವೆ ಕಾಮಗಾರಿಗಳಿಗೂ ಅಂದು ಚಾಲನೆ ನೀಡುವರು ಎಂದು ರಾಘವೇಂದ್ರ ತಿಳಿಸಿದರು.

Ad Widget

Related posts

ಯುಪಿಎಸ್ಸಿ ಪರೀಕ್ಷೆ ಯಲ್ಲಿ ಮೇಘನಾಗೆ 617 ನೇ ರ್‍ಯಾಂಕ್

Malenadu Mirror Desk

ಹುಣಸೋಡಿಗೆ ಹಟ್ಟಿ ಮೈನ್ಸ್ ತಜ್ಞರು

Malenadu Mirror Desk

ವೀರಶೈವ ಸಮಾಜಕ್ಕೆ ಕಾಂಗ್ರೆಸ್ ನಿಂದ ದ್ರೋಹ: ಈಶ್ವರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.