Malenadu Mitra
ರಾಜ್ಯಶಿವಮೊಗ್ಗ

ಕಾಶೀನಾಥ್ ನಾಯ್ಕ್ ಅವರನ್ನು ಸನ್ಮಾನಿಸಿದ ಕ್ರೀಡಾ ಸಚಿವ

ಟೋಕಿಯೊ ಒಲಂಪಿಕ್ ಚಿನ್ನದ ಪದಕ ವಿಜೇತ ನೀರಜ್‍ಚೋಪ್ರಾ ಅವರ ಕೋಚ್ ಶಿರಸಿಯ ಕಾಶೀನಾಥ್ ಅವರನ್ನು ಕ್ರೀಡಾ ಸಚಿವ ನಾರಾಯಣಗೌಡ ಅವರು ವಿಧಾನ ಸೌಧದಲ್ಲಿ ಸನ್ಮಾನಿಸಿದರು. ಈ ಸಂದರ್ಭ ಸರಕಾರದ ಹೆಚ್ಚಿವರಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ಮತ್ತಿತರರು ಹಾಜರಿದ್ದರು.
ಮಧು ಬಂಗಾರಪ್ಪ ಅವರಿಂದ ಸನ್ಮಾನ:
ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಮಧುಬಂಗಾರಪ್ಪ ಅವರು ಕಾಶೀನಾಥ್ ಅವರನ್ನು ಬೆಂಗಳೂರಿನ ತಮ್ಮ ಮನೆಗೆ ಬರಮಾಡಿಕೊಂಡು ಅವರನ್ನು ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ್ದ ಅವರು, ಕಾಶೀನಾಥ್ ಅವರು ಗ್ರಾಮೀಣ ಭಾಗದ ಕ್ರೀಡಾಳುಗಳಿಗೆ ಸ್ಫೂರ್ತಿಯಾಗಿದ್ದಾರೆ. ಕ್ರೀಡಾ ಕ್ಷೇತ್ರದ ಅವರ ಸಾಧನೆ ಮಾದರಿ ಎಂದಿದ್ದಾರೆ.

Ad Widget

Related posts

ಬಿ.ಎಸ್.ಎನ್.ಎಲ್ ನೆಟ್ವರ್ಕ್ ಸುಧಾರಣೆಗೆ ಆದ್ಯತೆ: ಸಂಸದ ರಾಘವೇಂದ್ರ, ಟವರ್ ನಿರ್ಮಾಣಕ್ಕೆ ಕೇಂದ್ರದಿಂದ ಮಂಜೂರಾತಿ

Malenadu Mirror Desk

ಅಗತ್ಯ ವಸ್ತು ಬಿಟ್ಟು ಉಳಿದ ಮಳಿಗೆ ಬಂದ್

Malenadu Mirror Desk

ಛೇ..ಸಚಿವರಿಗೆ..ಇದೆಂಥ ಪತ್ರ.. ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.