Malenadu Mitra
ರಾಜ್ಯಶಿವಮೊಗ್ಗ

ತುಂಗಾ ಸೇತುವೆಯಿಂದ ಹೊಳೆಗೆ ಹಾರಿದ ಯುವಕ, ಅದೃಷ್ಟವಶಾತ್ ಬದುಕುಳಿದ ಯುವಕನ ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

ಶಿವಮೊಗ್ಗದಲ್ಲಿ ತುಂಗಾ ಸೇತುವೆಯಿಂದ ನದಿಗೆ ಹಾರಿದರೂ ಯುವಕನೊಬ್ಬ ಬದುಕುಳಿದ ಪವಾಡ ಭಾನವಾರ ನಡೆದಿದೆ. ಶಿವಮೊಗ್ಗ ತುಂಗಾ ನಗರದ ತನ್ವೀರ್ ಎಂಬಾತನೇ ಬದುಕುಳಿದ ವ್ಯಕ್ತಿಯಾಗಿದ್ದಾನೆ. ಶಿವಮೊಗ್ಗ ಬೆಕ್ಕಿನ ಕಲ್ಮಠದ ಸಮೀಪದ ಹೊಸ ಸೇತುವೆಯಿಂದ ಹರಿಯುವ ನದಿಗೆ ಆತ ಹಾರಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಹೊಳೆಗೆ ಹೊಳೆಯ ನೀರಿನೊಂದಿಗೆ ಸಾಗಿದ್ದ ಆತ ನದಿಯ ನಡುವೆ ಸಿಕ್ಕಿ ಹಾಕಿಕೊಂಡಿದ್ದ ಆತ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ.


ಸ್ಥಳಕ್ಕೆ ಬಂದ ಅಗ್ನಿಶಾಮಕದಳದವರು ಕಾರ್ಯಾಚರಣೆ ನಡೆಸಿ ಯುವಕನನ್ನು ರಕ್ಷಿಸಿ ನದಿ ದಡಕ್ಕೆ ಕರೆತಂದಿದ್ದಾರೆ.
ತನ್ವೀರ್ ಶಿವಮೊಗ್ಗ ತುಂಗಾ ನಗರದ ನಿವಾಸಿಯಾಗಿದ್ದು, ಕಾಲುಜಾರಿ ಬಿದ್ದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಆದರೆ ಸೇತುವೆ ತಡೆ ಗೋಡೆ ಎತ್ತರ ಇರುವ ಕಾರಣ ಯಾವುದೇ ಕಾರಣಕ್ಕೂ ಜಾರಿಬೀಳು ಸಾಧ್ಯತೆ ಇಲ್ಲ. ತನಿಖೆಯಿಂದ ಸತ್ಯ ಹೊರಬೀಳಬೇಕಿದೆ.
ಮುಗಿಬಿದ್ದ ಜನ:
ಯಾರೊ ಸೇತುವೆಯಿಂದ ಹೊಳೆಗೆ ಹಾರಿ ಬದುಕುಳಿದಿದ್ದಾನಂತೆ, ಅವನ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿ ಹಬ್ಬುತ್ತಿದ್ದಂತೆ ಕಾರ್ಯಾಚರಣೆ ಸ್ಳಳದಲ್ಲಿ ಜನ ಜಂಗುಳಿ ನೆರೆದಿತ್ತು. ಇದರಿಂದ ಸಾರ್ವಜನಿಕ ಸಂಚಾರಕ್ಕೂ ಅಡಚಣೆಯಾಗಿತ್ತು.

Ad Widget

Related posts

ಪತ್ರಕರ್ತರು ಸಮಾಜಮುಖಿ ಪಥದಲ್ಲಿ ಸಾಗಬೇಕು: ಗೋಪಾಲ್ ಯಡಗೆರೆ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ

Malenadu Mirror Desk

ಕವಿ ಹೃದಯದ ವಾಜಪೇಯಿ ಅವರು ಪ್ರಕೃತಿಯ ಆರಾಧಕ: ಡಿ.ಹೆಚ್. ಶಂಕರಮೂರ್ತಿ

Malenadu Mirror Desk

ಶಾಲಾ ಶಿಕ್ಷಣ ವಿಕಾಸಕ್ಕೆ ಕ್ರಮ : ಮಧುಬಂಗಾರಪ್ಪ,ಸಾಗರ ತಾಲೂಕು ಪ್ರಗತಿಪರಿಶೀಲನಾ ಸಭೆಯಲ್ಲಿ ಸಚಿವರ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.